ಮಾಜಿ ಡಿಜಿಪಿ ಓಂ ಪ್ರಕಾಶ್ ಹತ್ಯೆಯಿಂದಾಗಿ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಘಟನೆ ಕುರಿತು ಪುತ್ರ ಕಾರ್ತಿಕೇಶ್ ಸ್ಪೋಟಕ ಮಾಹಿತಿ ನೀಡಿದ್ದಾರೆ. 'ತಂದೆಗೆ ಬೆದರಿಕೆ ಹಾಕಲಾಗುತ್ತಿತ್ತು. ತಾಯಿ ಮತ್ತು ಸಹೋದರಿ ಪ್ರತಿದಿನ ಜಗಳವಾಡುತ್ತಿದ್ದರು' ಎಂದು ಮಗ ದೂರು ನೀಡಿದ್ದು ಎಫ್ಐಆರ್ ದಾಖಲಿಸಲಾಗಿದೆ. 'ನನ್ನ ತಾಯಿ ಮತ್ತು ತಂಗಿಯೇ ತಂದೆಯನ್ನು ಕೊಂದಿದ್ದಾರೆ. ಅವರು ಖಿನ್ನತೆಯಿಂದ ಬಳಲುತ್ತಿದ್ದರು. ಪ್ರತಿದಿನ ನಮ್ಮ ತಂದೆಯೊಂದಿಗೆ ಜಗಳವಾಡುತ್ತಿದ್ದರು' ಎಂದು ಪುತ್ರ ಮಾಹಿತಿ ನೀಡಿದ್ದಾರೆ.




0 تعليقات