ಬೆಂಗಳೂರು : ಜಾತಿಗಣತಿ ವರದಿ ಬಗ್ಗೆ ಚರ್ಚಿಸಲು ರಾಜ್ಯ ಸರಕಾರ ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು. ಹಾಗೆಯೇ ಎಲ್ಲಾ ಸಮುದಾಯಗಳ ಸ್ವಾಮೀಜಿಗಳು, ಮುಖಂಡರು, ಬುದ್ದಿಜೀವಿಗಳನ್ನು ಆಹ್ವಾನಿಸಿ ಸಮಾಲೋಚನೆ ನಡೆಸಿ ಸರ್ವಸಮ್ಮತ ಪರಿಹಾರ ಕಂಡುಕೊಳ್ಳಬೇಕು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು. ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ಜಾತಿಗಣತಿಯನ್ನು ಜೆಡಿಎಸ್ ಯಾವುದೇ ಕಾರಣಕ್ಕೂ ವಿರೋಧಿಸುತ್ತಿಲ್ಲ. ಸಮೀಕ್ಷೆ ಕ್ರಮಬದ್ಧವಾಗಿಲ್ಲ, ಸೋರಿಕೆಯಾಗಿರುವ ಅಂಕಿಅಂಶಗಳ ಸತ್ಯಾಸತ್ಯತೆ ಬಗ್ಗೆಯಷ್ಟೇ ಪ್ರಶ್ನೆ ಮಾಡಿದ್ದೇವೆ. ಸಮೀಕ್ಷರು ಯಾರ ಮನೆಗೆ ಹೋಗಿದ್ದಾರೆ, ಯಾವ ಮಾನದಂಡದಡಿ ಸಮೀಕ್ಷೆ ನಡೆಸಿದ್ದಾರೆ ಎಂಬ ಸರಿಯಾದ ಮಾಹಿತಿ ಇಲ್ಲ. ಹಾಗಾಗಿ ಇಡೀ ವರದಿಯನ್ನು ಪುನರ್ ಪರಿಶೀಲಿಸಬೇಕು ’ ಎಂದು ಆಗ್ರಹಿಸಿದರು.
ಪಶ್ಚಾತ್ತಾಪ ಯಾತ್ರೆಯ ದಿನ ದೂರವಿಲ್ಲ:
‘‘ಭಾರತ್ ಜೋಡೋ ಯಾತ್ರೆ ನಡೆಸಿದ ರಾಹುಲ್ ಗಾಂಧಿ ಅವರಿಗೆ ಒಂದು ಪ್ರಶ್ನೆ? ಸಮೀಕ್ಷೆ ಹೆಸರಿನಲ್ಲಿ ಜಾತಿ ಜಾತಿ ಒಡೆದು ಕರ್ನಾಟಕಕ್ಕೆ ಯಾವ ಸಂದೇಶ ಕೊಡುತ್ತೀರಿ? ಸಮುದಾಯ ಗಳ ನಡುವೆ ವಿಷಬೀಜ ಬಿತ್ತಿದ್ದು, ಜನ ಬೀದಿಬೀದಿಗಳಲ್ಲಿಹೊಡೆದಾಡಬೇಕೆ? ನೀವು ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಯಾತ್ರೆ ಮಾಡುವ ದಿನ ದೂರವಿಲ್ಲ,’’ ಎಂದು ಹೇಳಿದರು.
ಡಿಕೆಶಿ ವಿರುದ್ಧ ವಾಗ್ದಾಳಿ:
‘‘ಮಿಸ್ಟರ್ ಡಿ.ಕೆ.ಶಿವಕುಮಾರ್ ಅವರೇ, ಪೆನ್ನು ಪೇಪರ್ ಕೊಡಿ ಎಂದು ಅಂಗಲಾಚಿ ಬೇಡಿಕೊಂಡಿರಿ. ಜನರು ಕೊಟ್ಟಿದ್ದಾರೆ. ಆ ಪೆನ್ನು ಪೇಪರ್ ಯಾವುದಕ್ಕೆ ಬಳಸುತ್ತಿದ್ದೀರಿ? ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿ ಸಿಕೊಳ್ಳಿ? ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಯಲ್ಲಿಖಾಲಿ ಸಿಲಿಂಡರ್ ಎತ್ತಿಕೊಂಡು ಪೋಸ್ ಕೊಟ್ಟಿದ್ದೀರಿ. ಭಾರವನ್ನೆಲ್ಲಾಜನರ ಮೇಲೆ ಹಾಕಿ ಖಾಲಿ ಎತ್ತಲು ನೀವೇ ಬೇಕೆ ಶಿವಕುಮಾರಣ್ಣ? ಅದ್ಭುತ ನಟನೆ ನಿಮ್ಮದು,’’ ಎಂದು ವ್ಯಂಗ್ಯವಾಡಿದರು.
0 Comments